ದಯ ಬಾರದ್ಯಾಕೊ ರಾಘವಾ
Category: ಶ್ರೀರಾಮ
Author: ವಿಜಯದಾಸ
ದಯ ಬಾರದ್ಯಾಕೊ ರಾಘವಾ
ಕಾಯಬೇಕು ಯೆಂದು ಕೊರಗಿ ಮೊರೆಯಿಡೆ
ನ್ಯಾಯವೇನು ಯೆನ್ನ ಮರತುಬಿಡುವದು
ಅಂದು ಅಜಮಿಳನು ಅಂತ್ಯಕಾಲದಲ್ಲಿ
ಕಂದ ನಾರ ಬಾಯೆಂದು ಕರಿಯಲು
ಅಂದ ಮಾತುಗಳಿಗೆ ಅತಿ ಹರುಷಿಸಿ
ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ||1||
ಹರಿಯೆ ಗತಿಯೆಂದು ಹೊಗಳು ಕಂದನ
ಹರುಷವಿಲ್ಲದೆ ಪಿತ ಕಷ್ಟಪಡಿಸಲು
ಊರು ತೋರದಂತಾ ಸ್ತಂಭದಿಂದ ಬಂದು
ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ||2||
ಸರ್ಪಶಯನನೆ ಸಾರ್ವಭೌಮನೆ
ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ
ಅಪ್ಪ ಗುರುವರ ವಿಜಯವಿಠ್ಠಲನೇ
ಒಪ್ಪದಿಂದ ವಲಿವ ವರದರಾಜನೇ ||3||