ಪೂರ್ಣಪ್ರಜ್ಞನೆಂಬ ಪರಿಪೂರ್ಣ

Category: ಶ್ರೀಮಧ್ವಾಚಾರ್ಯ

Author: ವಿಜಯದಾಸ

ಪೂರ್ಣಪ್ರಜ್ಞನೆಂಬ ಪರಿಪೂರ್ಣ
ಸುಜ್ಞಾನ ಸಮುದ್ರ ಮಧ್ವಮುನಿರಾಯ ||
ವಾರಣದಿಂದಲಿ ಬಂದೆ ವಾದಿಯ
ನಿವಾರಿಸಿದ | ಮಧ್ವ ಮುನಿರಾಯಾ

ಮಣಿವಂತನೆಂಬೊ ದೈತ್ಯ ಧಾರುಣಿಯೊಳಗೆ
ಸಂಕರನಾದಾ | ಮಧ್ವರಾಯಾ ||
ಅವ | ಜನಿಸಿ ಬಂದು ಉತ್ತಮರ
ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ ||1||

ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ |
ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ ||2||

ವೇದಶಾಸ್ತ್ರವೆಲ್ಲ ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ || ಅವ |
ಭೇದಾಭೇಧ ಇಲ್ಲ ಹೆತ್ತ ತಾಯಿ ಸತಿ ಒಂದೆ ಎಂದು ಮಧ್ವ ||3||

ಜಾತಿಧರ್ಮವೆಲ್ಲ ತೊರೆದು | ಜಾತಿ ಸಂಕರವಾಗೆ ಮಧ್ವ ||
ಭೂತಳದೊಳಗೆ ಮಿಥ್ಯ ಪಾತಕವೆ ತುಂಬಿತು | ಮಧ್ವರಾಯ ||4||

ಸುರರು ಚಿಂತಿಸಿ ಪೋಗಿ | ಪರಮೇಷ್ಠೆಗೆ
ಪೇಳಲು | ಮಧ್ವ ||ಬೊಮ್ಮ |
ಪರಿಹರ ಕಾಣದೆ ಹರಿಗೆ ಬಿನ್ನೈಸಿದ | ಮಧ್ವ||5||

ಜಯ ತನಯನ್ನ ಕರೆದು | ದಯದಿಂದ
ಪೇಳಲು | ಮಧ್ವ || ವೇಗ |
ಪ್ರಿಯದಲ್ಲಿ ಬಂದು ಮಧ್ಯಗೇಹನಲ್ಲಿ ಅವತರಿಸಿದ | ಮಧ್ವ ||6||

ಮುಖ್ಯ ಶಿಷ್ಯ ತಿಪ್ಪಣ್ಣ ಅವಧಾನಿ ಸೋತು ವೈಷ್ಣವನಾಗೆ | ಮಧ್ವ ||
ಮಾಯಾ ಶಕ್ಯವಲ್ಲವೆಂದು ಸೋತು |
ಸಂಕರ ಮೂಲಿಯ ಪೊಕ್ಕ | ಮಧ್ವ ||7||

ಶುಂಠ ಮಿಕ್ಕ ರಕ್ಕಸರ ಗಂಟಲ ಮುರಿದುವಟ್ಟಿ | ಮಧ್ವ ||
ಉಂಟು ಮಾಡಿದನು ವೈಕುಂಠ ಪತಿದೇವವೆಂದು | ಮಧ್ವ||8||

ಮರುತ ಮತ ಉಧ್ಧರಿಸಿ | ಗುರುಕುಲ ತಿಲಕನಾದ | ಮಧ್ವ ||
ಶಿರಿ ವಿಜಯವಿಠ್ಠಲನ್ನ ಚರಣಾಬ್ಜ ಭೃಂಗನಾದ ಮಧ್ವ ||9||