ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು

Category: ಶ್ರೀಕೃಷ್ಣ

Author: ವಿಜಯದಾಸ

ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು
ತ್ರಾಣ ತ್ರಾಹಿ ತಾತಾ ದಾತಾ | ನಾನಾ
ಯೋನಿಯಲಿ ಬಂದೆ ನೊಂದೆ ಗುರುವೆ
ನೀನೆ ಗತಿಯೊ

ಭರತ ಭಾರತಿರಮಣ ಭಾರತ ಪ್ರತಿಪಾದ್ಯ
ಭರತ ಕುಲೋತ್ತಮ ಭವ್ಯ
ಭರದಿಂದಲಿ ಎನ್ನಭಾರ ವಹಿಸುವ
ಭರಣ ಭಾರದ್ವಾಜಾತ್ಮಜ ಭಾರಭಂಗಾ ||1||

ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ
ಕ್ಷಿತಿ ಲೋಕಾಂತದಲ್ಲಿ ಬಳಲಿ
ಮತಿಯ ಕಾಣದೇ
ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ||2||

ಪಂಚಾಹುತಿಯಲಿ ಹಾಕದಿರೋ ಜೀವೇಶ
ಸಂಚಿತಾವಳಿ ಸರ್ವನಾಶಾ
ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ
ಸಂಚಕನೆ ಪುರುಷಾಕಾರನೀಯೋ ||3||

ಅಪೂಪ ಬಹುರೂಪ ಹರಿಚಾಪ ಪ್ರತಾಪ
ಕಪಿಕುಲಾಂಬುಜ ದಿನಪ ಸುರಪ
ರಿಪು ವಿಪಿನಕಾಲ ಮಹಾ
ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ4
ತೇಜೋದಕ ಅನ್ನ ಚತುರ್ವಿಂಶತಿ ತತ್ವದಲಿ
ರಾಜಿಸುವ ರಾಗವಿದೂರಾ
ವಾಜಿರೂಪ ವಾಶಿಷ್ಟ ವಂದ್ಯಾ ವರದಾ
ಮಜ್ಜಗದ್ಗುರು ಮುಖ್ಯ ಪ್ರಾಣಾ ||5||

ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ
ಈರ್ವ ಸ್ಥಾನದಲಿ ನೀನೇ
ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ
ಗೀರ್ವಾಣ ಜ್ಯೇಷ್ಠ ಶ್ರೇಷ್ಠ ಮೂರ್ತಿ |6||

ಮಾನವ ಪವನ ಪವಮಾನ್ ಮಾನವ ರೂಪಾ
ಮಾನಾಭಿಮಾನಿಗಳೊಡಿಯಾ
ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ ||7||

ನಾಮಾದಿ ವಿಡಿದು ಪ್ರಾಣಕಳೆಗಳತನಕ
ಸಮಸ್ತ ಪರಮಾಣು ತಿಳಿಸೋ
ಕಾಮಿಸುವನೆ ಇದನೆ ಹೃತ್ಕಮಲದೊಳಗಿದ್ದ
ಸಾಮ ಸೂರ್ಯಸ್ಥಿತನೆ ಸೂತ್ರಾ8
ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ
ದಪ್ಪ ಚತುರದ್ವಾರವಾಸ
ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ
ಅಪ್ಪಿಕೊಂಡು ಮೆರೆದ ಧೀರಾ ||9||