ವೇಣು ಗೋಪಾಲವಿಠ್ಠಲರೇಯ
Category: ಶ್ರೀಕೃಷ್ಣ
Author: ವಿಜಯದಾಸ
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ
ರೇಣು ನಂಬಿದ ಮಾನವ
ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ
e್ಞÁನ ಭಕುತಿಯ ಕೊಡುವುದು ಸ್ವಾಮಿ
ಪರದೈವ ನೀನೆಂದು ಮೂಢಮತಿಯಾದವನು |
ಪರಿಪೂರ್ಣವಾಗಿ ನಿರುತ |
ನೆರೆ ನಂಬಿದೆನು ನಾನಾ ಪ್ರಕಾರದಲಿ
ಸ್ಮರಣೆ ಮಾಡುತ ಮನದಲಿ |
ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ
ಸ್ತರ ಮಾಡು ಇವನ ಕೀರ್ತಿ
ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ
ಕರಪಿಡಿದು ಪಾಲಿಸುವುದು ಸ್ವಾಮಿ||1||
ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ
ಸಾಕುವುದು ಸಾಕಾರನೆ
ನೂಕು ದುರಳದಿಂದ ಬಂದ ವಿಪತ್ತುಗಳ
ತಾಕಗೊಡದಂತೆ ವೇಗ
ಬೇಕು ಬೇಕೆಂದೆನುತ ಪೊಗಳುವವನಿಗೆ ಶುಭ |
ವಾಕು ನೇಮಿಪುದು ಸತತ
ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ
ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ ||2||
ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು |
ಸರ್ವರನು ಈ ವಿಧದಲಿ |
ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ
ನಿವ್ರ್ಯಾಜದವನ ಮಾಡಿ
ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ
ಸರ್ವದಾ ಕೃಪೆಮಾಡು ಎಂಬೆ
ಸರ್ವರಾಧಾರ ಸಿರಿ ವಿಜಯವಿಠ್ಠಲ ನಿನ್ನ
ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ ||3||