ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ
Category: ಶ್ರೀಕೃಷ್ಣ
Author: ವಿಜಯದಾಸ
ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ
ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ |
ಕರುಣವ ಮಾಡಿ ಪರಿಯಲಿ ಸಾರಂಗ |
ಧರನೆ ಧರಣಿಧರ ವರ ಪರಿಯಂತಾ
ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು |
ಹೇಮ ಮುನೀಶ್ವರ ಕಾಮಿಸಿ ಹರಿಪಾದ |
ತಾಮರಸ ಹೃದಯಧಾಮದೊಳಗೆ
ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ ||
ಸಾಮಜವರದನ ನಾಮವ ನೆನೆಯಲು |
ಸೋಮ ಸಹೋದರೆ ಹೇಮ ತೀರಥದೊಳು |
ತಾ ಮನಗೊಂಬ ನಾಮನೆ ಪಡೆದು ||1||
ಮಂಗಳಾಂಗಿಯೇ ಬರಲು ರಂಗರಾಯನು ಸಾ |
ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು |
ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ |
ತಿಂಗಳ ನಂದಾದಿ ಕಂಗಳಿಗೊಪ್ಪಲು |
ತುಂಗ ಮಹಿಮ ವಿಹಂಗಾದಿಗಳಿಂದ
ಹಿಂಗದಲೆ ಸೊಗಸಂಗಳ
ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ ||2||
ಜಯ ಕುಂಭಘೋಣನಿಲಯಾನೆನೆಸುವ ಉ |
ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ |
ದಯಾಪಯೋನಿಧಿ ಸಾದಯ ವಿಮಲ ನಯನ |
ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ |
ಪಯೋನಿಧಿಸುತೆ ಧರುಣಿಯ ಎಡಬಲದಲ್ಲಿ
ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ |
ನಯನ ಮೀತಾರ ಪಾಲಯಪಾವನದೇವಾ |
ದಯಮುಖ ಹರಾ ವಿಜಯವಿಠ್ಠಲಪರಾ ||3||