ಬೆಲ್ಲದ ಕಟ್ಟೆಯ ಕಟ್ಟಿ

Category: ಶ್ರೀಕೃಷ್ಣ

Author: ಪುರಂದರದಾಸ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೊಗುವುದೇನಯ್ಯಾ ||

ಏನು ನೋಡಿದರೇನು
ಏನು ಕೇಳಿದರೇನು |
ಮನದೊಳಗಿನ ತಾಮಸ ಮಾಣದನ್ನಕ ||

ಕೊಳಲ ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು
ಶ್ರೀಪುರಂದರ ವಿಟ್ಠಲಾ ||