ತನುವಿನ ಸತ್ವವ ನಿಲಿಸಿತ್ತು,

Category: ವಚನಗಳು

Author: ಅಕ್ಕಮಹಾದೇವಿ

ತನುವಿನ ಸತ್ವವ ನಿಲಿಸಿತ್ತು,
ಮನದ ವಿರಕ್ತಿಯ ಕೆಡಿಸಿತ್ತು.
ಘನವ ಕಾಣಲೀಯದು ದುಃಖ.
ಅರುಹಿರಿಯರ ತರಕಟ ಕಾಡಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.