ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

Category: ಶ್ರೀಕೃಷ್ಣ

Author: ವ್ಯಾಸರಾಯ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ || ಪ ||

ಅಂಬುಜನಾಭನ ಅಖಿಲ ಲೋಕೇಶನ
ಕಂಬುಕಂಧರ ಕೃಷ್ಣ ಕರುಣಾಸಾಗರನ || ಅ ||

ತರಳ ಪ್ರಹ್ಲಾದ ಸಾಕ್ಷಿ - ಸರಸಿಯೊಳಿದ್ದ
ಕರಿರಾಜನೊಬ್ಬ ಸಾಕ್ಷಿ
ಮರಣ ಕಾಲದಿ ಅಜಾಮಿಳ ಮಗನನು ಕರೆಯೆ
ಗರುಡನೇರಿ ಬಂದ ಗರುವರಹಿತನ || ೧ ||

ದೊರೆಯೂರು ಏರಬಂದ ಪುತ್ರನನ್ನು
ಕೊರಳ್ಹಿಡಿದ್ಹೊರಡಿಸಲು
ಅರಣ್ಯದೊಳಗವನಿದ್ದ ಸ್ಥಳದಲ್ಲಿ
ಭರದಿಂದೋಡಿ ಬಂದ ಭಕ್ತವತ್ಸಲನ || ೨ ||

ತರುಣಿ ದ್ರೌಪದಿ ಸೀರೆಯ ದುಶ್ಯಾಸನ
ಸರಸರ ಸೆಳೆಯುತಿರೆ
ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟು
ತ್ವರದಿ ಅಕ್ಷಯವಿಟ್ಟ ಸಿರಿಕೃಷ್ಣರಾಯನ || ೩ ||