ಎಲೆ ಮನ ಮುರಾರಿಯನೆ ಕೊಂಡಾಡೋ

Category: ಶ್ರೀಕೃಷ್ಣ

Author: ವಿಜಯದಾಸ

ಎಲೆ ಮನ ಮುರಾರಿಯನೆ ಕೊಂಡಾಡೋ ॥

ಕಾಲನ ದೂತರ ಕಾಲಿಗೆ ಬಿದ್ದರೆ
ನಾಳೆಗೆ ನಿಲುವರೇ ನೋಡೋ ॥

ಮಂದಿಯ ಮಾತಿಗೆ ಎಂದಿಗೂ ಮರುಗದೆ
ಮುಂದಿನ ಗತಿ ನೀ ನೋಡೋ ॥

ರಾಜೀವಾಕ್ಷ ಘನಶ್ಯಾಮ
ವಿಜಯ ವಿಟ್ಠಲನ ಪಾಡೋ ॥