ಯಾರಿಗೆ ಯಾರುಂಟು ಎರವಿನ ಸಂಸಾರ

Category: ವೈರಾಗ್ಯ

Author: ಪುರಂದರದಾಸ

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ॥

ಬಾಯಾರಿತು ಎಂದು ಬಾವಿ ನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೇ ॥

ಬಿಸಿಲುಗಾಳಿಗಾಗಿ ಮರದ ಛಾಯೆಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತು ಹರಿಯೇ ॥

ತಂದೆ ಶ್ರೀಪುರಂದರ ವಿಟ್ಠಲ ನಾರಾಯಣ
ನಾ ಹೋಗೋ ಹೊತ್ತಿಗೆ ನೀ ಕಾಯೋ ಹರಿಯೇ ॥