ಸಾಗುತಿಹುದು ಚಿತ್ತಭೃಂಗ
Category: ಶ್ರೀಮಹಾಕಾಳಿ
Author: ವಚನವೇದ
ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ |
ಸಕಲ ವಿಷಯ-ಕುಸುಮರಸವು
ಎಷ್ಟಾದರು ತುಚ್ಛವೆಂದು
ತಿಳಿಯಿತಿಂದು ಮನಸಿಗೆ ||
ತಾಯ ಪಾದಕಮಲ ನೀಲ
ಮಧು ಕುಡಿಯುವ ಭೃಂಗ ನೀಲ
ನೀಲದಲ್ಲಿ ನೀಲ ಸೇರಿ
ನೀಲವಾದ ಪರಿಯನು
ಕಂಡು ಬೆರಗುವಡುವನು ||
ಸುಖ ಬಂದರೆ ಹಿಗ್ಗದೆ
ನೋವಿನಲ್ಲಿ ಕುಗ್ಗದೆ
ಆನಂದಸಿಂಧುವಿನಲಿ
ನಿರುತ ತೇಲುತಿರುವನು
ಭಕ್ತ ಕಮಲಾಕಾಂತನು ||