ತಡೆಯುತಲಿದೆ ಪುಷ್ಪಮಾಲೆ

Category: ಇತರೆ

Author: ಕನಕದಾಸ

ತಡೆಯುತಲಿದೆ ಪುಷ್ಪಮಾಲೆ
ಒಡಲೊಳಗಾತ್ಮನ ವರ ಮಕುಟಾಗ್ರದಿ

ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯ
ನವತರ ಕುಸುಮ ದಾಮವು ಕಿರಿದು
ವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದ
ನವ ವೈಜಯಂತಿಯ ಹಿರಿದಾಗಿ ಭಾವಿಸಿ ||1||

ಸ್ಥಿರ ಮತಿಯೆಂಬ ಆಸನವನು ಅಳವಡಿಸಿ - ತ್ರಿ
ಕರಣವೆಂಬ ತಾಂಬೂಲವನೊಪ್ಪಿಸುತ - ಮಾಯ
ಮರವೆಯೆಂಬ ದಕ್ಷಿಣೆ ಕೊಟ್ಟು - ಮಮ ಭಾವ
ದಿರುವಿನ ತಮವನೋಡಿಸಿ ನಿಂದ ಗುರುದೇವ ||2||

ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿ
ಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿ
ಪ್ರಜ್ಞಾನವೆಂಬ ದೀವಿಗೆ ಸ್ತಂಭ ಹೂಡಿ
ಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ ||3||