ಅನ್ಯಾಯದಲಿ ಬಾಳಿ ಬದಕೋರೆ

Category: ಶ್ರೀಕೃಷ್ಣ

Author: ವಿಜಯದಾಸ

ಅನ್ಯಾಯದಲಿ ಬಾಳಿ ಬದಕೋರೆ | ನಾಳೆ |
ಕಿನ್ನೇಶದೂತರು ಎಳಿಯಾರೆ
ಹಿಂದಿನ ದುಃಖವ ನೆನಸಿಕೊ | ನೀನು |
ಬಂದದೆ ಒಂದೊಂದು ಗುಣಿಸಿಕೊ |
ಮುಂದೀಗ ಎಚ್ಚತ್ತು ನೋಡಿಕೊ |
ಇದು ಸಂದೇಹವೆನದೆ ನಿಜವಾಗಿ ತಿಳಿದಕೊ ||1||

ಗರ್ಭಯಾತನೆ ಬಲು ಹೇಸಿಕೆ | ವಳಗೆ |
ನಿರ್ಬಂಧವಾಗಿ ಬೆಳೆದು ಮೇಲಕೆ |
ದೊಬ್ಬುವರು ನಿನ್ನ ಕೆಳಿಯಿಕೆ |
ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ||2||

ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ |
ಬಳಗವೆಲ್ಲ ಸಂತೋಷಬಡುವರು |
ಆಯಿತು ಮಗುವೆಂದು ನುಡಿವರು |
ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು ||3||

ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ |
ಅಕ್ಕರದಿಂದಲಿ ನೋಡಿ ಕೊಂಡಾಡಿ |
ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ |
ರಕ್ಕಸಿಯ ತಂದು ನಿನಗೆ ಜತಿ ಮಾಡಿ ||4||

ನೆಲೆ ಇಲ್ಲದ ಮಮತೆಯೊಳು | ಮುಳುಗಿ |
ತಲೆಕೆಳಗಾಗಿ ನಡೆದು ಹಗಳಿರುಳು |
ಕುಲನಾಶಕನೆಂಬೊದು ಬಾಳು | ಬಿಡು |
ತಿಳಿಯ ಪೇಳುವೆನು ಎತಾರ್ಥವ ಕೇಳು||5||

ದುರ್ವಾಸನೆ ನಾರುವ ಬೀಡು | ಇದು |
ಸ್ಥಿರವಲ್ಲ ಎಂದಿಗು ಹಂಬಲ ಬಿಡು |
ಹರಿದಾಸರ ಸಂಗ ಮಾಡು | ಇನ್ನು |
ಹರಿನಾಮಗಳ ಕೊಂಡಾಡು ||6||

ಆವಾವ ಜನ್ಮದಲಿ ನೀನು | ಒಮ್ಮೆ |
ದೇವ ಎಂದೆನಲಿಕ್ಕೆ ನಾಲಿಗಿತ್ತೇನು |
ಈ ಉತ್ತಮವಾದ ಈ ತನು | ಬಂತು |
ಕೋವಿದನಾಗಿ ಶ್ರೀ ಹರಿಯನ್ನು ಕಾಣು||7||

ಆ ಮರ ಈ ಮರ ಎನಲಾಗಿ | ಅವನ |
ತಾಮಸದ e್ಞÁನ ಪರಿಹಾರವಾಗಿ |
ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ |
ಭೂಮಿಯೊಳಗೆ ಬಾಳಿದನು ಚನ್ನಾಗಿ ||8||

ಭಂಗಮಾಡುವಾಗ ದ್ರೌಪದಿ | ಸಿರಿ |
ರಂಗ ಯೆನಲಾಗಿ ಕಾಯ್ದ ಶ್ರೀಪತಿ |
ಕಂಗಡದಲೆ ಪುರಂದರನ ಅಂತರಂಗ
ವಿಜಯವಿಠ್ಠಲ ನಂಬು ||9||